ಕರೆದು ಕೆರದಾಗ್ ಹೊಡ್ದಾಂಗ್ ಕೇಳು,
ನೀನು ಕ್ರೂರ ಪ್ರಾಣಿ||
ತಲೆ ಕೆರ್ಕೊಂಡ್ ಕೂತ್ಕೊಂಡಿದ್ರೆ,
ನೀನೆ ಪರಮ ಜ್ಞಾನಿ||
ಮಾಡಿದ್ ತಪ್ಪು ಅಂತ್ಹೇಳಿದ್ರೆ,
ಬೀಳ್ತಾವ್ ಮೆಟ್ನಾಗ್ ಏಟು||
ತಪ್ಪೇನಿಲ್ಲಾಂತ ತೆಪ್ಪಗಿದ್ರೆ
ಆಹಾ!! ನೋಟೆ ಇಲ್ದೇ ವೋಟು||
ಮಾತು ಮನೆ ಕೆಡ್ಸುತ್ತಾಂತ
ಗೊತ್ತಿದ್ರೂನೂ, ಬೇಕೋ ನಿಂಗೆ ಮಾತು??
ಏನು ನಿಂಗೆ ಗೊತ್ತಿಲ್ಲಾಂತ, ನಿನ್ನ ಬಾಯ್ನ
ಮುಚ್ಕೊಂಡಿದ್ರೆ, ಮುಚ್ಕೊತಾವೆ ತೂತು.....
ಹುಸಿಮನಸಿನ ಹುಡುಗನ ಕೊಂಚ ಕೊಂಚ ಕಲ್ಪನೆಗಳು, ನೆನಪಿನ ನೀಲಾಕಾಶದಿಂದ ಹನಿ-ಹನಿಯಾಗಿ ಇಳಿದು ಪದಗಳಾಗಿ ಮೂಡಿದಾಗ....
Google Search

Custom Search
Thursday, October 28, 2010
ಮೌನ...
Labels:
"short poem",
election,
gundachandru,
kavana,
note,
silence,
silent,
ನೋಟು,
ಮಾತು,
ಮೌನ
Friday, October 22, 2010
ಹುಸಿಯಾದೆ ನೀನು...
ನೀರಲೆಯ ನೊರೆ ಮೇಲೆ ಮೆಲ್ಲ-ಮೆಲ್ಲನೆ ನಡೆವೆ,
ನೂರಾರು ಸಾಲುಗಳ ಒಂದೇ ಮಾತಲಿ ನುಡಿವೆ,
ಇನ್ಯಾರು ಬಂದರು ನಮಗಿಲ್ಲ ಇಂದು-ನಾಳೆಯ ಗೊಡವೆ,
ಕಣ್ಣೀರು ಸುರಿಸದಿರು ಉಳಿಸು ನನ್ನ, ಓ ಒಲವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.
ಊರೆಲ್ಲ ಅಲೆದರು, ಮನದಲ್ಲಿ ನಿನ್ನ ಜಪ ಒಲವೆ,
ಕರೆಯಲ್ಲೂ ನೀನಿರುವೆ, ಕಾರಣವು ನಿನ್ನ ನಡುವೆ?
ಕೊರಳಲ್ಲೆ ಉಳಿದಿರುವೆ, ಕೋಪವಿರುವುದೆ ನಮ್ಮ ನಡುವೆ?
ಕರುಣೆಯಲೆ ಕನಿಕರಿಸೇ, ಮನದಾಳದಿಂದ ನಿನ್ನ ಕರೆವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.
ನೂರಾರು ಸಾಲುಗಳ ಒಂದೇ ಮಾತಲಿ ನುಡಿವೆ,
ಇನ್ಯಾರು ಬಂದರು ನಮಗಿಲ್ಲ ಇಂದು-ನಾಳೆಯ ಗೊಡವೆ,
ಕಣ್ಣೀರು ಸುರಿಸದಿರು ಉಳಿಸು ನನ್ನ, ಓ ಒಲವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.
ಊರೆಲ್ಲ ಅಲೆದರು, ಮನದಲ್ಲಿ ನಿನ್ನ ಜಪ ಒಲವೆ,
ಕರೆಯಲ್ಲೂ ನೀನಿರುವೆ, ಕಾರಣವು ನಿನ್ನ ನಡುವೆ?
ಕೊರಳಲ್ಲೆ ಉಳಿದಿರುವೆ, ಕೋಪವಿರುವುದೆ ನಮ್ಮ ನಡುವೆ?
ಕರುಣೆಯಲೆ ಕನಿಕರಿಸೇ, ಮನದಾಳದಿಂದ ನಿನ್ನ ಕರೆವೆ,
ಹುಸಿಯಾದರೂ ನೀನು ಗೆಳತಿ, ಹಸಿ ಪ್ರೀತಿಯನೆ ನಾನು ಕೊಡುವೆ.
Labels:
" ಹುಸಿಯಾದೆ ನೀನು",
"short poem",
gundachandru,
kavana,
love,
water,
waves,
ಪ್ರೀತಿ
Thursday, October 21, 2010
ನೀರಲೆ...
ನೀರಲೆಯ ಮೇಲೆ ನಡೆವ ಓ ನೀರೆ,
ನನ್ನೆಡೆಗೆ ನಡೆದು ನೀ ಬಾರೆ,
ಎಳೆಬಳ್ಳಿ ಕಟಿಯ ಓ ಚೆಲುವೆ,
ನಿನ್ನೆಡೆಗೆ ಸೆಳೆದೆ ನನ್ನೊಲವೆ,
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.
ಸುರನರರ ಮರೆಸುವ ಚೆಲುವೆ,
ಸುರಪಾನದಾ ಮತ್ತನೀನಳಿಸುವೆ,
ಹುಸಿಯಾಟ ಆಡದಿರು ನೀ ಒಲವೆ,
ಬಿಸಿನೋಟ ಯಾಕೆ? ಸಾಕು ನಿನ್ ನಗುವೆ
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.
ನನ್ನೆಡೆಗೆ ನಡೆದು ನೀ ಬಾರೆ,
ಎಳೆಬಳ್ಳಿ ಕಟಿಯ ಓ ಚೆಲುವೆ,
ನಿನ್ನೆಡೆಗೆ ಸೆಳೆದೆ ನನ್ನೊಲವೆ,
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.
ಸುರನರರ ಮರೆಸುವ ಚೆಲುವೆ,
ಸುರಪಾನದಾ ಮತ್ತನೀನಳಿಸುವೆ,
ಹುಸಿಯಾಟ ಆಡದಿರು ನೀ ಒಲವೆ,
ಬಿಸಿನೋಟ ಯಾಕೆ? ಸಾಕು ನಿನ್ ನಗುವೆ
ಸರ ಸರನೆ ಇತ್ತಕಡೆ ಜಾರಿ,
ನನ್ನೆಡೆಗೆ ಒಲಿದು ನೀ ಬಾರೆ.
Labels:
"short poem",
gundachandru,
kavana,
water,
waves,
ಕವನ,
ಚೆಲುವೆ,
ನೀರಲೆ
Tuesday, October 19, 2010
ಅನ್ನ-ಹೊನ್ನು-ಮಣ್ಣು...
ಹುಡ್ಕೋಂಡ್ ಹೋದೆ ಚಿಲ್ಲಿ ಚಿಕನ್ನು,
ಸಿಕ್ಕಿದ್ ಮಾತ್ರ ಖಾಲಿ ಬನ್ನು,
ಹೊಟ್ಟೇನ್ ಸೇರಿತ್ತ್ ಅವನ ಬೆನ್ನು,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು,
ಉಣ್ಣೋಕೆ ಬೇಕಾ ಅಷ್ಟೊಂದ್ ಹೊನ್ನು?
ಬದ್ಕೋಕ್ ಬೇಕಾದಷ್ಟು ತಿನ್ನು,
ಸತ್ಯ ನೀನು ತಿಳ್ಕೊ ಗೆಳೆಯ,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು......
ಸಿಕ್ಕಿದ್ ಮಾತ್ರ ಖಾಲಿ ಬನ್ನು,
ಹೊಟ್ಟೇನ್ ಸೇರಿತ್ತ್ ಅವನ ಬೆನ್ನು,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು,
ಉಣ್ಣೋಕೆ ಬೇಕಾ ಅಷ್ಟೊಂದ್ ಹೊನ್ನು?
ಬದ್ಕೋಕ್ ಬೇಕಾದಷ್ಟು ತಿನ್ನು,
ಸತ್ಯ ನೀನು ತಿಳ್ಕೊ ಗೆಳೆಯ,
ಕೊನೆಗ್ ಎಲ್ಲರೂ ಸೇರೋದ್ ಮಣ್ಣು......
Thursday, October 7, 2010
ತನುವ ಬಿಸಿ...
ಅರಿತು ಬಾಳುವ ಒಂದು ಮುಗ್ದ ಜೀವ!
ಮರೆಸುವುದು ಮನದ ಎಲ್ಲ ನೋವ,
ತಣಿಸುವುದು ತನುವ ಬಿಸಿಯ ಕಾವ,
ಖುಷಿಯಲೇ ಕುಣಿಸುವುದು ಈ ಮುದ್ದು ಮನವ...
ಮರೆಸುವುದು ಮನದ ಎಲ್ಲ ನೋವ,
ತಣಿಸುವುದು ತನುವ ಬಿಸಿಯ ಕಾವ,
ಖುಷಿಯಲೇ ಕುಣಿಸುವುದು ಈ ಮುದ್ದು ಮನವ...
Subscribe to:
Posts (Atom)