Google Search

Custom Search

Wednesday, October 17, 2012

ಕನ್ನಡತಿ....


ಕರುಣದಲಿ ನೋಡೆ ಕಮಲನಯನೆ,
ಕರುನಾಡ ಕನ್ನಡ ಕುವರ ನಾನಿರುವೆ,
ಹೊರನಾಡ ಹೊಲಸು ಹಂದಿಗಳೇಕೆ ನಿನಗೆ,
ಚರಣದಾಸಿಯಾಗಬೇಕಿಲ್ಲ ನನಗೆ, ಹರುಷದಿಂದಲಿ ಪ್ರೀತಿಯ
ಹೂರಣವ ಉಣಿಸಿದರೆ ಸಾಕು ಮುದ್ದು ಮನಕೆ...

ಬೆಳ್ಳನೆಯದೆಲ್ಲಾ ಎಂದಿಗೂ ಹಾಲಲ್ಲ.
ಬೆಳ್ಳಗೇ ಬೆಳಗುವುದು ತಿಳಿಯ ಸುಣ್ಣದ ನೀರು,
ಬೆಳ್ಳಿ ಬೆಳಕಿನ ಚಂದ್ರ ಕಡುಗತ್ತಲಲೇ
ಹೊಳೆಯುವನು, ಹಾಲ ಶರಧಿಯಲಿ ಅದು ಬರಿಯ ಬಿಂಬ,
ಬೆಣ್ಣೆ ಸುಣ್ಣದ ಅಂತರ ಅರಿತರೆ ಸಾಕು ಮುದ್ದು ಮನಕೆ...

ಕಡುಕಪ್ಪು ಬಣ್ಣವೇ ಕಠಿಣ ವಜ್ರದ್ದು,
ಕಡೆದು ತೀಡಿದಮೇಲೆ ಆಳದಲಿ ಸಿಗುವುದು,
ಕಡೆಗಣಿಸದಿರು ಕಪ್ಪೆಂದು ನನ್ನ,
ಕಡೆಗಳಿಯವರೆಗೂ ಕೊಡೆಯಡಿಯಲಿ ನಿನ್ನ
ಕೈಹಿಡಿದು ನಡೆಸುವೆ ಓ ಕನ್ನಡದ ಹೆಣ್ಣೇ,
ಕನ್ನಡವೇ ನನ್ನುಸಿರು ಕರುನಾಡು ಕಲ್ಪತರು,
ಇಚ್ಛೆಯಿಂದಲಿ ಸ್ವಚ್ಚ ಕನ್ನಡತಿ ನೀನಾದರೆ ಸಾಕು ಮುದ್ದು ಮನಕೆ...

No comments: